A part of Indiaonline network empowering local businesses

ರೈಲ್ವೆ ಹಳಿ ದಾಟುವಂತೆ ಮೆಟ್ರೋ ರೈಲಿನ ಹಳಿ ದಾಟಲು ಮುಂದಾದ ಇಬ್ಬರು ಪ್ರಯಾಣಿಕರು, 10 ನಿಮಿಷ ಸೇವೆಗೆ ಅಡ್ಡಿ

News

ಬೆಂಗಳೂರು: ಮಹಾಕವಿ ಕುವೆಂಪು ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ಇಬ್ಬರು ಮೆಟ್ರೋ ಪ್ರಯಾಣಿಕರು ಮೆಟ್ರೋ ರೈಲು ಹಳಿಗಳ ಮೇಲೆ ದಾಟಲು ಯತ್ನಿಸಿದರು. ಇದರಿಂದಾಗಿ ಶನಿವಾರ 10 ನಿಮಿಷಗಳ ಕಾಲ ಗ್ರೀನ್ ಲೈನ್‌ನಲ್ಲಿ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿತು ಮತ್ತು ಇಬ್ಬರ ವಿರುದ್ಧ ಮೆಟ್ರೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಕ್ಕುಗಳು, ನಾಯಿಗಳು, ಪಕ್ಷಿಗಳು ಮತ್ತು ನವಿಲುಗಳು ಮೆಟ್ರೋ ಹಳಿಗಳ ಮೇಲೆ ನಡೆದಾಡುವ ಘಟನೆಗಳು ಈ ಹಿಂದೆ ಸಂಭವಿಸಿದ್ದರೂ, ಗೃಹ ರಕ್ಷಕರು ಅಥವಾ ಬಿಎಂಆರ್‌ಸಿಎಲ್ ಸಿಬ್ಬಂದಿ ಫ್ಲಾಟ್‌ಫಾರ್ಮ್‌ನ ಎಚ್ಚರಿಕೆಯ ಹಳದಿ ರೇಖೆಯನ್ನು ದಾಟಲು ಯಾರಿಗೂ ಅನುಮತಿ ನೀಡದ ಕಾರಣ ರೈಲು ಹಳಿಗಳ ಬಳಿಗೆ ಸಾರ್ವಜನಿಕರು ತೆರಳುವುದೇ ಅಪರೂಪ. 

750 ವಿ ಡೈರೆಕ್ಟ್ ಕರೆಂಟ್ ವೋಲ್ಟೇಜ್ ಅನ್ನು ಪೂರೈಸುವ ಥರ್ಡ್ ರೈಲ್, ಮೆಟ್ರೋ ರೈಲುಗಳು ಮೆಟ್ರೋ ನೆಟ್‌ವರ್ಕ್‌ನಾದ್ಯಂತ ಟ್ರ್ಯಾಕ್‌ಗಳಿಗೆ ಸಮಾನಾಂತರವಾಗಿ ಚಲಿಸುತ್ತದೆ ಮತ್ತು ಸುರಕ್ಷತೆಯ ಕಾರಣಗಳಿಗಾಗಿ ಅದರ ಹತ್ತಿರ ಯಾರ ಪ್ರವೇಶಕ್ಕೂ ಅನುಮತಿ ನೀಡುವುದಿಲ್ಲ.

ಮಹಾಕವಿ ಕುವೆಂಪು ಮೆಟ್ರೋ ನಿಲ್ದಾಣವು ಶ್ರೀರಾಂಪುರ ಮತ್ತು ರಾಜಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಇದೆ. ಈ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದಿಂದ ಬಂದಿದ್ದ ಇಬ್ಬರು ಪ್ರಯಾಣಿಕರು, ಎದುರಿನ ರೈಲಿಗೆ ತೆರಳಬೇಕಿತ್ತು. ಈ ವೇಳೆ ಅವರು ತಾವು ನಿಂತಿರುವ ಪ್ಲಾಟ್‌ಫಾರ್ಮ್‌ನಿಂದ ಕೆಳಗೆ ಹಾರಿ ಹಳಿಗಳನ್ನು ದಾಟಲು ಮುಂದಾಗಿದ್ದರು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ ಎಲ್ ಯಶವಂತ ಚವಾಣ್ ಹೇಳಿದರು.

'ಹಳಿಗಳನ್ನು ದಾಟುವ ಅವರ ಪ್ರಯತ್ನವನ್ನು ಕಂಡ ನಮ್ಮ ಸಿಬ್ಬಂದಿ, ತಕ್ಷಣವೇ ತುರ್ತು ಟ್ರಿಪ್ ಸಿಸ್ಟಮ್ ಅನ್ನು ಸಕ್ರಿಯಗೊಳಿಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು. ಈ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು 10 ನಿಮಿಷಗಳ ಕಾಲ ನಿಲ್ಲಿಸಲಾಯಿತು ಮತ್ತು ನಿಲ್ದಾಣದ ಮೂಲಕ ಹಾದುಹೋಗುವ ನಾಲ್ಕು ರೈಲುಗಳು ವಿಳಂಬವನ್ನು ಅನುಭವಿಸಿದವು' ಎಂದು ಚವಾಣ್ ಹೇಳಿದರು. 
ಮೆಟ್ರೋ ಸುರಕ್ಷತಾ ಕಾಯಿದೆಯ ಸೆಕ್ಷನ್ (64) ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ತಲಾ 250 ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿದ ಬಳಿಕ ಅವರನ್ನು ಬಿಡಲಾಯಿತು. (KANNAD PRABHA)

48 Days ago