A part of Indiaonline network empowering local businesses
Chaitra Navratri

ಕಂಬಳಿ ಕೇಳಿದರೆ ಕರ್ಚಿಫ್ ನೀಡಿದ್ದಾರೆ: ಮಧ್ಯಂತರ ಪರಿಹಾರ ಬಿಡುಗಡೆ ಕುರಿತು ಪ್ರಕಾಶ್ ರಾಜ್ ವ್ಯಂಗ್ಯ

news

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ಕೇವಲ ರೂ.1,200 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಹೊದ್ದುಕೊಳ್ಳಲು ನಾವು ಕಂಬಳಿ ಕೇಳಿದರೆ, ಕೇವಲ ಕರ್ಚೀಫ್'ನ್ನು ಭಿಕ್ಷೆ ಕೊಟ್ಟು ಬೀಗುತ್ತಿದ್ದಾರೆಂದು ಹೇಳಿದ್ದಾರೆ.    ತಮ್ಮ ಜೊತೆಗಿನ ಟ್ವೀಟ್ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಜನರು ಮಾಡಿರುವ ಟೀಕೆಗಳನ್ನು ಪ್ರಕಾಶ್ ಹಂಚಿಕೊಂಡಿದ್ದಾರೆ. (KANNADA PRABHA)

1656 Days ago