ಮುಂಬೈ; ಬಾಲಿವುಡ್ ಸೆಲಬ್ರಿಟಿಗಳ ವಿರುದ್ಧ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ನಟ ಕಮಲ್ ಖಾನ್. ಇದೀಗ ಹೊಸ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ಈ ಬಾರಿ ಅವರ ಮಾತಿನ ಬಾಣಕ್ಕೆ ತುತ್ತಾಗಿರುವವರು ನಾಯಕ ನಟ ರಣ್ ವೀರ್ ಸಿಂಗ್. ರಣ್ ವೀರ್ ಸಿಂಗ್ ಅವರು ಬ್ಯಾಂಡ್ ಬಾಜಾ ಬಾರಾತ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಆ ಸಿನಿಮಾವನ್ನು ಖ್ಯಾತ ಯಶ್ ರಾಜ್ ಫಿಲಂಸ್ ಸಂಸ್ಥೆ ನಿರ್ಮಿಸಿತ್ತು.
ಆ ಸಿನಿಮಾ ಮೂಲಕ ನಾಯಕನಾಗಿ ತಮ್ಮ ಪುತ್ರನನ್ನು ಲಾಂಚ್ ಮಾಡಲು ರಣ್ ವೀರ್ ಸಿಂಗ್ ತಂದೆ ಯಶ್ ರಾಜ್ ಸಂಸ್ಥೆಯ ಮುಖ್ಯಸ್ಥ ಆದಿತ್ಯ ಚೋಪ್ರಾ ಅವರಿಗೆ 20 ಕೋಟಿ ರೂ. ಕೊಟ್ಟಿದ್ದರು ಎಂದು ಕಮಲ್ ಖಾನ್ ಬಾಂಬ್ ಸಿಡಿಸಿದ್ದಾರೆ.
(KANNADA PRABHA)